ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಶ್ವಾಸ್ ಭಾರದ್ವಾಜ್
ಇತ್ತೀಚಿನ ಬರಹಗಳು: ವಿಶ್ವಾಸ್ ಭಾರದ್ವಾಜ್ (ಎಲ್ಲವನ್ನು ಓದಿ)

ನದಿತಾಯಿಗೆ ಶಾಶ್ವತವಾಗಿ ಕಣ್ಮರೆಯಾಗಲು ಇದಕ್ಕಿಂತ ಸೊಗಸಾದ ಕೊನೆಯ ತಾವು ಮತ್ಯಾವುದು ಬೇಕು?
ನದಿಯಮ್ಮಳಿಗೆ ಇನ್ಯಾವ ದಾರಿಯುಂಟು ಈಗ; ಹಿಂತಿರುಗಿ ಹೋಗಲಾರಳಾಕೆ!
ಅವಳ ಹಾಗೆ ಜೀವನಾನುಭವ ಸವೆಸಿ, ಹರಿದು ಬಂದವರು
ಯಾರೂ ಮತ್ತೆ ಹಿಂತಿರುಗಲಾರರು; ಬಂದ ದಾರಿಯತ್ತ ಮತ್ತೆ ಬೆನ್ನ ತಿರುಗಿಸಿ,
ಈ ಸೃಷ್ಟಿಯಲ್ಲೇ ಹಾಗೆ ಹಿಂದೆ ತಿರುಗಿ ಪಯಣಿಸುವ ಅಸ್ತಿತ್ವಗಳೇ ಇಲ್ಲ; ಹಾಗಾಗುವ ಕ್ರಿಯೆ-ಕಾರ್ಯಗಳು ಅಸಾಧ್ಯ..

ನದಿತಾಯಿ ಮಹಾಸಾಗರದ ನೀಲಿಯಲ್ಲಿ ಲೀನಳಾಗುವ ಅಪಾಯವನ್ನು ಎದುರಿಸಲೇಬೇಕು;
ಆ ಅಂತಿಮ ಪ್ರವೇಶದಿಂದ ಮಾತ್ರವೇ ಅವಳೊಡಲಿನ ದುಗಡಗಳು ಶಾಶ್ವತವಾಗಿ ಮಾಯವಾಗುವುದು..
ನದಿತಾಯಿಯ ತಿಳಿವಳಿಕೆಗೆ ಅರಿವಾಗುವ ಸತ್ಯವೊಂದಿದೆ ಇಲ್ಲಿ,
ಅದೇನೆಂದರೆ, ಈ ಮಹಾಮಿಲನ ಅವಳು ಮಹಾಸಾಗರದಲ್ಲಿ ನಾಪತ್ತೆಯಾಗುವ ಘಟನೆಯಲ್ಲ..
ನದಿತಾಯಿ ಕೆಲವೇ ಕ್ಷಣಗಳಲಿ ಮಹಾಸಾಗರವಾಗಿ ಬದಲಾಗುವ ಪ್ರಕ್ರಿಯೆಯಿದು..

(ಖಲೀಲ್ ಗಿಬ್ರಾನ್ ಬರೆದ Fear ಪದ್ಯದ ಭಾವಾನುವಾದ)