ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

‘ಜೀವದನಿ’ ಜೀವಪರ ದನಿ ಎತ್ತುವ ಕೃತಿ

ಸುಮಾ ವೀಣಾ

“ಜಗತ್ತಿನ ಕಟ್ಟುಕತೆ ಎಂದರೆ ಹೆಣ್ಣು ಮಕ್ಕಳು ನಿಷ್ಪ್ರಯೋಜಕರು” ಎಂಬ ಅನಾದರದ ಹೇಳಿಕೆಯನ್ನು ಉಲ್ಲೇಖಿಸುತ್ತಾ ಜಗತ್ತಿನ ಹೆಚ್ಚಿನ ಭಾಗದಲ್ಲಿ ಹೆಣ್ಣಿನ ಮೌಲ್ಯವನ್ನು ‘ಸೌಂದರ್ಯ ಮತ್ತು ಯೌವನಕ್ಕೆ’ ಕಟ್ಟಿ ಹಾಕಲಾಗಿದೆ ಎನ್ನುವ ಅಸಮಾಧಾನವನ್ನು ತೋಡಿಕೊಳ್ಳುತ್ತಾರೆ. ಹೆಣ್ಣನ್ನು ದೈಹಿಕವಾಗಿ ಅಲ್ಲ ಹೆಣ್ಣನ್ನು ಹೃದಯದ ಕಣ್ಣಿನಿಂದ ನೋಡುವವರು ಬೇಕು ಅದು ನನ್ನ ಗಂಡ ರೋಜರ್ನಿಂದ ಸಾಧ್ಯವಾಯಿತು ಎಂದು ತಮ್ಮ ಪತಿಯ ಉಲ್ಲೇಖವನ್ನು ಮಾಡುತ್ತಾರೆ.