ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡ ಕಾಂತಾರ..

ರವೀಂದ್ರನಾಥ ದೊಡ್ಡಮೇಟಿ
ಇತ್ತೀಚಿನ ಬರಹಗಳು: ರವೀಂದ್ರನಾಥ ದೊಡ್ಡಮೇಟಿ (ಎಲ್ಲವನ್ನು ಓದಿ)

ಕನ್ನಡ ಕಾಂತರದೋಳ್
ಜನಪದ ಅಂತರಂಗದಲ್ಲಿ
ಕಣ್ಣು ಮುಚ್ಚೇ ಕಾಡೆ ಗೂಡು
ಮುದ್ದಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ಬಿಟ್ಟೇ ಬಿಟ್ಟೆ
ನಿಮ್ಮ ಯ ಹಕ್ಕಿ ಬಿಚ್ಚಿ ಟ್ಟು ಕೊಳ್ಳಿ..!

ಕನ್ನಡ ಕಾಡುಗಳಲ್ಲಿ
ಪುಣ್ಯ ಕೋಟಿ ಹುಲಿ
ಪಂಚತಂತ್ರ ಕಥೆಗಳ ರಾಜ ಸಿಂಹ
ಸವಡಿ ಊರಿನ ದುರ್ಗಸಿಂಹ

ಕಾಂತಾರ ಸೀಮೆಯ ಪಂಪವಾಸಿಸಿದ
ಕೋಗಿಲೆ ಮೇಣ್ ಮರಿದುಂಬಿಯಾಗಿ ಬಯಸಿದ
ಬನವಾಸಿ ಸುಂದರ
ಕದಂಬರ ವೈಜಯಂತಿಪುರದ ಮಧುಕೇಶ್ವರ..
ನಾ ದೇವನೊ ನೀ ದೇವನೊ
ಎಂದ ಬಳ್ಳಿಗಾವೆ ಅಲ್ಲಮನ ಗುಹೇಶ್ವರ
ಅನಿಮಿಷಯ್ಯನ ಬೆರಗು ಸಾಕ್ಷಾತ್ಕಾರ..!!

ಕಾಂತಾರ ಮಲೆಗಳಲ್ಲಿ ಮಗಳು
ಹೆಗ್ಗಡತಿ ಕಾನೂರ ಕಗ್ಗತ್ತಲ ಪೂವಯ್ಯ
ಕನ್ನಡ ತನ ಬೆಳಗಿದ ಕಥೆ ಹೇಳಿದ ಕುವೆಂಪು..

ಕಾಂತಾರ ಕನ್ನಡ ಡಿಂಡಿಮಬಾರಿಸಿ..
ಮುಗಿಲ ಮುಟ್ಟುವ ಜಯಭೇರಿ..
ನಿಲುಕದ ಆಕಾಶದಲ್ಲಿ ಕೈಯಿಂದ ಮುಟ್ಟಿ
ತಾರೆಗಳ ಹಿಂಡು ಹಿಡಿದು ಕನ್ನಡಿಸಿ
ಕನ್ನಡತನವ ಜಗದ ಬೆಳ್ಳಿ ತೆರೆಗಳಲ್ಲಿ
ಕನ್ನಡ ತೇರ ನೇರಿ ಮೆರೆಸಿ
ತಾಯಿ ಭುವನೇಶ್ವರಿ ಯಲ್ಲಿ..!!