ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾ ಹೊತ್ತ ರಾತ್ರಿ

ನರಸಿಂಹ ಮೂರ್ತಿ ಜನಾರ್ಧನ್
ಇತ್ತೀಚಿನ ಬರಹಗಳು: ನರಸಿಂಹ ಮೂರ್ತಿ ಜನಾರ್ಧನ್ (ಎಲ್ಲವನ್ನು ಓದಿ)

ರಾತ್ರಿ ಹೊತ್ತು
ಒಂಟಿ ಪಯಣ
ರಸ್ತೆಯಲ್ಲಿ ಶ್ವಾನ
ಕಾರ್ಯ ಪ್ರಧಾನ
ಬಂದರೆ ಅಪರಿಚಿತ
ನಾಯಿಬೈಗುಳ ಉಚಿತ..!

ರಸ್ತೆಯಲ್ಲಿಲ್ಲ ಜನಗಳ ದಂಡು
ಒಂಟಿ ಸಿಪಾಯಿ ನಾನಿಂದು
ಬೀದಿ ದೀಪದ ಹಾವಳಿ
ಕಣ್ಣು ಕಣ್ಣಿಗೆ ಪ್ರಭಾವಳಿ!

ಇಲ್ಲವಲ್ಲ ವಾಹನ ಸದ್ದು
ಹೊಗೆ ಇಲ್ಲದ ದಾರಿ ಮುದ್ದು ಮುದ್ದು

ಸೂರ್ಯ ಚಂದ್ರರ ಕಳ್ಳಾಟ​
ನಮ್ಮ ನಿದ್ರೆಯ ಸವಿಯೂಟ…

ತಣ್ಣ ತಣ್ಣನೆ ಗಾಳಿಯೂ ಇದೆ..
ಮೆಲ್ಲ ಮೆಲ್ಲ ಹಕ್ಕಿ ಹಾಡು ಇದೆ..
ಎಲ್ಲಾ ಬಿಲಗಳ ಕದ ತೆರೆದಿದೆ..
ಮಾತು ಮಂಥನ ನಡೆದಿದೆ!

ರಾತ್ರಿ ಇಂಥ ಚಂದ ಅಲ್ವೇನೋ!
ಮತ್ತೊಂದು ಜೀವ ಸಂಕುಲದ ಬೆಳಗಲೋ!