ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಿತೇಂದ್ರ ಬೇದೂರು
ಇತ್ತೀಚಿನ ಬರಹಗಳು: ಜಿತೇಂದ್ರ ಬೇದೂರು (ಎಲ್ಲವನ್ನು ಓದಿ)

ದಾರಿ ತೋರುತಿದೆ ಯಾರೋ ಹಚ್ಚಿದ ಹಣತೆ,
ಕಣ್ಣ ಒರೆಸುತಿದೆ ಯಾರದೋ ಕವಿತೆ.
ಬಳಲಿ ಬೆಂಡಾಗಿ,ಭಾವ ಒಣಗಿರುವಾಗ,
ಹಸಿರು ತಂದಿದ್ದು ಯಾವ ಒರತೆ?

ದಾರಿಯುದ್ದಕ್ಕೂ ಯಾರೋ ಚೆಲ್ಲಿದ ನೆರಳು
ದನಿಗೂಡಿಸಿದ್ದು ಎಷ್ಟೊಂದು ಕೊರಳು.
ತುತ್ತ ನೀಡಿದ್ದು ಇನ್ನ್ಯಾರೋ ಬಸಿದ ಬೆವರು…

ಯಾರು ತುಂಬಿದ ಬಣ್ಣವೋ ಏನೋ,
ರಂಗಾಗಿದೆ ಬಾಳ ರಂಗವಲ್ಲಿ,
ಬಣ್ಣ ಮಾಸಲೂಬಹುದು ಮುಂದೆ,
ಆದರೂ ಬದುಕು ಚೆಂದವಿಲ್ಲಿ

ಯಾರೋ ನೀಡಿದ ಹೆಸರು,
ಯಾರದೋ ಉಸಿರು,
ನಾನೆಂಬುದೊಂದು ನೆಪಮಾತ್ರವಿಲ್ಲಿ.