ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೀವಳಿಗೆ

ಯಮುನಾ ಜಿ
ಇತ್ತೀಚಿನ ಬರಹಗಳು: ಯಮುನಾ ಜಿ (ಎಲ್ಲವನ್ನು ಓದಿ)

ಹಚ್ಚಿರಿ ಹಣತೆಯನು
ಮಮತೆಯ ಕಿಚ್ಚಿನಲಿ,
ನುಚ್ಚುನೂರಾಗಿಹ
ಮನದ ಸೂರೊಳು
ತುಂಬಿರುವ ತಮವ
ಹೊಡೆದೋಡಿಸಲು..

ಬಿತ್ತಿರಿ ಬಾಂಧವ್ಯವನು
ಬತ್ತಿದೆದೆಯಲಿ ಪ್ರೀತಿ
ಭಾವೈಕ್ಯತೆಯ ಸಾರಿ
ಚೈತನ್ಯ ತುಂಬಿರಿ
ಜಾತಿ,ಮತ,ಪಂಥಗಳ
ಅಂಧಕಾರವ ಅಡಗಿಸಿ…

ಮರೆಯಿರಿ ಪಟಾಕಿ ಗದ್ದಲವ
ಅಳಿದವರ ನೆನಪೊಂದೇ ಸಾಕು!
ಆಕಾಶ ಬುಟ್ಟಿಯ ತುಂಬಾ
ಬಣ್ಣಬಣ್ಣದ ಕನಸ ತುಂಬಿ
ಬಡವರೊಡಲಿನ ಸೊಡರು
ಚೆಲ್ಲಲಿ ಎಲ್ಲೆಡೆ ಬೆಳಕಿನೋಕುಳಿಯ…

ಒಲುಮೆಯ ಪ್ರಭೆಯಲ್ಲಿ
ಮೇಳೈಸಿ ಬೆಳಗಲು
ಅನುದಿನವು ದೀವಳಿಗೆ
ದೀನ ದುರ್ಬಲರಿಗೆ!
ಪ್ರಜ್ವಲಿಸಿ ದೀವಿಗೆಯ ಜ್ವಾಲೆಯಲಿ
ಸಾಗಲಿ ನವ ಮನ್ವಂತರದೆಡೆಗೆ…!!