ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾಲಾ.ಮ. ಅಕ್ಕಿಶೆಟ್ಟಿ
ಇತ್ತೀಚಿನ ಬರಹಗಳು: ಮಾಲಾ.ಮ. ಅಕ್ಕಿಶೆಟ್ಟಿ (ಎಲ್ಲವನ್ನು ಓದಿ)

ಸರಿಯುವವನಿದ್ದರೆ, ಬೇಗ ಸರಿದು ಬಿಡು
ಅಷ್ಟಷ್ಟೇ ಸರಿ ಬೇಡ
ಹಿಂಸೆ ದೇವರಿಗೂ ಕಷ್ಟ

***

ಜನನ ಮರಣದ ಆಟದಲ್ಲಿ
ಹೀಗೆ ಅರಳಿ ಘಮ ಕೊಟ್ಟು
ಹಾಗೆ ಕ್ಷಣ ಹೊತ್ತಿನಲ್ಲಿ ಭೂಮಿಯನ್ನ
ಅಪ್ಪಿಕೊಳ್ಳುವವು ಹೂವುಗಳು

***

ತುಂಬಿದೊಟ್ಟೆಗೆ ತುತ್ತಿನ
ಒಂದು ಅಗುಳೂ ಭಾರ
ಹಳಸಿದ ಸಂಬಂಧ ಯಾವ ಲೆಕ್ಕ!!!

***

ಮೌನ ತುಟ್ಟಿಯಾದಂತೆ
ಸಂಬಂಧ ಸೋವಿ
ವಿಮುಕ್ತಿ ಬೇಗ

***

ಅನವಶ್ಯಕ ಪ್ರೀತಿ
ಕಾಳಜಿಯೆಂಬ
ವಿಷ ಮತ್ತೊಂದಿಲ್ಲ

***

ಮೌನಕ್ಕೆ ದೂರ
ಸಮೀಪದ ಭಿಡೆ
ಬಂಗಾರದ ಗುಂಜಿಯಷ್ಟಿಲ್ಲ

***

ಬದುಕು ಅನಿವಾರ್ಯ
ಅಂದುಕೊಂಡಾಗ
ಅದರ ಸಾರವಿಲ್ಲ

***