ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಮಿತಾ ಭಾಗ್ವತ್

ಶ್ರೀಮತಿ ಅಮಿತಾ ಭಾಗವತರವರು ವೃತ್ತಿಯಲ್ಲಿ ನ್ಯಾಯವಾದಿಗಳು; ಪ್ರವೃತ್ತಿ ಯಲ್ಲಿ ಸಾಹಿತ್ಯಾಸಕ್ತರು. 'ಕುಮುದಾಳ ಭಾನುವಾರ' ಇವರ ಪ್ರಕಟಿತ ಕವನ ಸಂಕಲನ. ಕಳೆದ 13 ವರ್ಷಗಳಿಂದ 'ಹವ್ಯಕ ವೆಲಫೇರ ಟ್ರಸ್ಟ, ಮುಂಬಯಿಯ ಮುಖವಾಣಿ ಯಾದ 'ಹವ್ಯಕ ಸಂದೇಶ' ಮಾಸ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂಬಯಿಯ ಸಾಹಿತ್ಯ ಬಳಗವು ರಜತ ಮಹೋತ್ಸವದ ಅಂಗವಾಗಿ ' ಸಾಧಕರಿಗೆ ನಮನ' ಎನ್ನುವ ಶೀರ್ಷಿಕೆಯಲ್ಲಿ ಪ್ರಕಟಸಿದ ಕಿರು ಹೊತ್ತಿಗೆ ಗಳಲ್ಲಿ , ಅನೇಕ ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಅಮಿತಾ ರವರ ಬಗೆಗಿನ 'ಕಡತೋಕಾ ಕಣ್ಮಣಿ ಅಮಿತಾ ಭಾಗವತ್' ಕೂಡ ಸೇರ್ಪಡೆಯಾಗಿದೆ.