ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಣಕು ರಾಮನಾಥ್

ಅಣಕು ರಾಮನಾಥ್ ಕನ್ನಡ ಶ್ರೇಷ್ಠ ಹಾಸ್ಯ ಬರಹಗಾರರ ಸಾಲಿನಲ್ಲಿ ಕೇಳಿ ಬರುವ ಚಿರಪರಿಚಿತ ಹೆಸರು. ಪನ್, ಹಾಸ್ಯದ ಪಂಚು, ರಚನಾತ್ಮಕ ವ್ಯಂಗ್ಯಗಳಿಂದ ಕೂಡಿದ ಚುಟುಕು,ಲೇಖನ, ಭಾಷಣಗಳು ಕನ್ನಡಿಗರ ಮನಸೂರೆ ಗೊಂಡಿದ್ದು ಸರ್ವ ವಿದಿತ. ಬೀಚಿಯವರು ಆರಂಭಿಸಿದ್ದ "ನೀವು ಕೇಳಿದಿರಿ" ಎಂಬ ಅಂಕಣವನ್ನು ಹನ್ನೊಂದು ವರ್ಷಗಳಿಗಿಂತ ಹೆಚ್ಚು ಕಾಲ ಮುಂದುವರೆಸಿಕೊಂಡು ಬಂದದ್ದೂ ಒಂದು ದಾಖಲೆ. ಅಣಕು ರಾಮನಾಥ್ ಇದ್ದಲ್ಲಿ ಹಾಸ್ಯದ ಹೊನಲು,ನಗೆ ಪ್ರವಾಹ.