ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೀತಾ ಮಂಜುನಾಥ್

ಶ್ರೀಮತಿ ಗೀತಾ ಮಂಜುನಾಥ್ ಅವರು ಮೂಲತಃ ಬೆಂಗಳೂರಿನವರು. ಬಿ.ಎಸ್ಸಿ ಪದವಿ ಪಡೆದಿರುವ ಇವರು ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿಯನ್ನು ಪ್ರಥಮ ರ್ಯಾಂಕ್ ಹಾಗೂ ವರದರಾಜ ಆದ್ಯ ಬಂಗಾರದ ಪದಕ ಗಳಿಸಿಕೊಂಡಿದ್ದಾರೆ. ‘ಸ್ವಾತಂತ್ರ್ಯವೀರ ವೀರ್ ಸಾವರ್ಕರ್’ ಅವರ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಮುಂಬೈ ವಿಶ್ವವಿದ್ಯಾಲಯ ನಡೆಸುತ್ತಿರುವ ಕನ್ನಡ ಕಲಿಕಾ ಯೋಜನೆಯಲ್ಲಿ ಕೈಜೋಡಿಸಿದ್ದಾರೆ. ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಮುಂಬಯಿಯ ಸಾಂಸ್ಕೃತಿಕ ಸಾಧಕರಾದ ವಿದುಷಿ ಸರೋಜಾ ಶ್ರೀನಾಥ್ ಅವರ ಜೀವನ ಸಾಧನೆ ಹಿನ್ನಲೆಯಲ್ಲಿ ಸಂಶೋಧನಾ ಯೋಜನೆಯೊಂದನ್ನು ಪೂರ್ಣಗೊಳಿಸಿ ‘ಕಲಾಸೌರಭ ಸರೋಜಾ ಶ್ರೀನಾಥ್’ ಎಂಬ ಚೊಚ್ಚಲ ಕೃತಿಯೊಂದನ್ನು 2018ರಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ.

ಚಿತ್ರ ಕೃಪೆ – ಜಯ್ ಸಾಲಿಯಾನ ಮುಂಬಯಿಯ ಸಾಂಸ್ಕೃತಿಕ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ವಿದುಷಿ ಸರೋಜಾ ಶ್ರೀನಾಥ್ ಅವರೂ ಒಬ್ಬರು….