ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತರಗತಿ ಕೋಣೆ

ನಿರಂಜನ ಕೆ ನಾಯಕ
ಇತ್ತೀಚಿನ ಬರಹಗಳು: ನಿರಂಜನ ಕೆ ನಾಯಕ (ಎಲ್ಲವನ್ನು ಓದಿ)

ನನ್ನ ತರಗತಿ ಕೋಣೆ
ಈ ದೇಶದ ಪ್ರತಿಬಿಂಬ
ಹಲವು ಭಾವ, ಹಲವು ವೇಷ
ನನಗದೆ ಬಲು ಜಂಭ

ಏಕತೆಯಲಿ ಕೂಡಿ ಕಲಿವ
ನಾವೇ ಭವ್ಯ ಭವಿಷ್ಯ
ಜ್ಞಾನದ ಅಭ್ಯುದಯಕೆ
ಸತ್ಯದರ್ಶನ ಮುಖ್ಯ

ಒಂದೇ ಸೂರು
ಚಿಂತನೆ ಅದರಡಿ ನೂರು
ತತ್ವ ಅದಾವುದಾದರೇನು
ಮನುಜತ್ವಕೆ ನಮ್ಮ ಮತ

ಹಿಡಿದ ಈ ಪುಸ್ತಕ
ತೊಟ್ಟ ಈ ಬಟ್ಟೆ
ಎಲ್ಲವೂ ಈಗ ವಿವಾದ
ಮೂಡದಿರಲಿ ನಮ್ಮಲಿ ಬೇಧ

ಒಟ್ಟಿಗೆ ಕೂತು ಉಣ್ಣುವ
ಅನ್ನಕೆ ಇರದು ಮತ
ನಮ್ಮ ಸ್ನೇಹವೇ ಅಮೃತ
ನಾಳೆಗೂ ಶಾಶ್ವತ

ಒಳಗಣ್ಣ ತೆರೆಸುವುದೇ
ನಿಜದಿ ಶಿಕ್ಷಣ
ಅರಿವ ಕಣ್ಣಲಿ
ಅಂಧಕಾರ ದಮನ!!