ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

‘ರತಿಯ ಕಂಬನಿ’ ಉದುರುವ ಸಂಭ್ರಮ

ನೀ ಒಲುಮೆ ತುಂಬಿ
ಆಡಿದಿಯೆಂಬ ಮಾತುಗಳನು
ನನ್ನ ಸಂದೇಹ ತಕ್ಕಡಿಯಲಿ
ತೂಗಿ
ತುಂಬಿದ ತೊಟ್ಟಿಯಲಿ
ಅದ್ದಿಬಿಡುತ್ತೇನೆ
ಯುರೇಕಾ!!!
ಚೆಲ್ಲಿದ್ದು ನಿಷ್ಠೆ
ಉಳಿದದ್ದು ಚೇಷ್ಟೆ

  • ನಂದಿನಿ ಹೆದ್ದುರ್ಗ

ಇಂದು ಭಾನುವಾರ ಹತ್ತೊಂಬತ್ತನೆಯ ತಾರೀಖು ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿರುವ ಬಿ ಎಮ್ ಶ್ರೀ ಸಭಾಭವನದಲ್ಲಿ ನಂದಿನಿ ಹೆದ್ದುರ್ಗ ಅವರ ಮೂರನೇ ಕವನ ಸಂಕಲನ ‘ರತಿಯ ಕಂಬನಿ’
ಲೋಕಾರ್ಪಣೆಗೊಳ್ಳಲಿದೆ.

ಕಾರ್ಯಕ್ರಮ ಬೆಳಿಗ್ಗೆ ಹತ್ತೂವರೆಗೆ ಆರಂಭವಾಗುತ್ತದೆ.

ಹಿರಿಯ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಅಧ್ಯಕ್ಷತೆಯ ವೇದಿಕೆ ಕಾರ್ಯಕ್ರಮದಲ್ಲಿ ಕವಯಿತ್ರಿ ಎಚ್ ಎಲ್ ಪುಷ್ಪ ಅವರು ಕೃತಿ ಬಿಡುಗಡೆ ಮಾಡಲಿದ್ದು ಕೃತಿಯ ಕುರಿತು ಕವಿ ಹಾಗೂ ಕಥೆಗಾರರಾದ ಬಿ ಎಮ್ ಹನೀಫ್ ಅವರು ಮಾತನಾಡುತ್ತಾರೆ.

ವಾಗೀಶ ಹೆಗಡೆಯವರ ಅಂದದ ಮುಖಪುಟವಿರುವ ಸಂಕಲನವನ್ನು ಹಿರಿಯ ಪತ್ರಕರ್ತರಾದ ಆರ್ ಪೂರ್ಣಿಮಾ ಅವರ ವಿಕಾಸ ಪ್ರಕಾಶನ ಹೊರತರುತ್ತಿದ್ದು ಪುಸ್ತಕದ ಮುಖಬೆಲೆ ನೂರೈವತ್ತು ರೂಪಾಯಿಗಳು.

ನವಕರ್ನಾಟಕ ,ಅಂಕಿತ ಮತ್ತು ಇತರ ಪುಸ್ತಕ ಮಳಿಗೆಗಳಲ್ಲಿ ಸಂಕಲನ ಲಭ್ಯವಿರುತ್ತದೆ.

ಆನ್ ಲೈನ್ ಖರೀದಿಗಾಗಿ

navakanataka,booksloka.com,bookmaadi.com,rutumana.com ಇಲ್ಲಿ ಸಂಪರ್ಕಿಸಬಹುದು