ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಧೇಭಾವ

ಗೌರೀಶ್ ಅಬ್ಳಿಮನೆ
ಇತ್ತೀಚಿನ ಬರಹಗಳು: ಗೌರೀಶ್ ಅಬ್ಳಿಮನೆ (ಎಲ್ಲವನ್ನು ಓದಿ)

ಮಧುವನಕೆ ಬಂದಳು ರಾಧೆ; ಕೃಷ್ಣ!
ಶ್ರೀಕೃಷ್ಣ ಗಾನದ ಮೋಹಕ ಮರುಳೆ
ರಾಧೆ ಬಂದಳು; ಗೋಪಾಲ ಗೋವಿಂದ
ಕರೆಯುತಲಿ ಇಂದು; ಕೃಷ್ಣಾ ಶ್ರೀಕೃಷ್ಣ!

ಮೌನಿಯ ಮಾಧವ ಮಾಧವಿ ನೀನು
ಗೋಕುಲ‌ ಗೋಪನ ಗೋಪಿಚಂದ್ರಿಕೆ
ರಾಧೆ ಬಂದಳು; ಕೊಳಲಿನ ನಾದಕೆ
ಅಂದವೆ ಚಂದಕೆ ಕೃಷ್ಣೆ ಶ್ರೀಕೃಷ್ಣೆ

ಕನಸಿನ ಕಾವ್ಯವೇ ಬೃಂದಾವನ ಸಿರಿ
ಪನ್ನೀರ ಕಡಲಲಿ ತಾವರೆ ಝರಿ ಝರಿ
ರಾಧೆ ಬಂದಳು; ಹರಿಯೊಳಗಿನ ಭಾವ
ಪ್ರೇಮಕೆ ಅರಮನೆ; ರಾಧೇ ರಾಧಾ!