ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮನ ದೇಸಾಯಿ

ಹುಟ್ಟಿದ್ದು ಬೇಂದ್ರೆ ಅಜ್ಜನ ಊರಲ್ಲಿ. ಬೆಳೆದದ್ದು, ಶಿಕ್ಷಣ ಎಲ್ಲ ಹುಬ್ಬಳ್ಳಿಯಲ್ಲಿ. ಸುದೀರ್ಘ​ ೧೨ ವರ್ಷ ಗೃಹಿಣಿ ಜೀವನದ ನಂತರ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ ಎ ಪದವಿ. "ಕೆಂಡಸಂಪಿಗೆ" ಇ- ಮ್ಯಾಗಜಿನ್ ನಿಂದ ಬರವಣಿಗೆಯ ಪಯಣ ಶುರುವಾಯಿತು. ಪಂಜು ಇ-ಮ್ಯಾಗಜಿನ್ ಗೆ "ಸುಮ್ ಸುಮನಾ" ಅಂಕಣದಲ್ಲಿ ಲೇಖನ, ಕಥೆ, ಲಲಿತ ಪ್ರಬಂಧ, ಲಹರಿ ಬರಹಗಳನ್ನು ಬರೆಯುತ್ತಾರೆ. ಬೆಳಗಾವಿಯ ಸ್ಥಳೀಯ ದಿನ ಪತ್ರಿಕೆ ಲೋಕದರ್ಶನ ದಲ್ಲಿ ರವಿವಾರಕ್ಕೊಮ್ಮೆ " ಸುಮನ ಸುಧೆ" ಅಂಕಣಕ್ಕೆ ಬರೆಯುತ್ತಿದ್ದರು. ಕಥೆ, ಕವನ, ಹನಿಗವನ,ಹಾಸ್ಯ, ಲಹರಿ, ಲೇಖನ ಹೀಗೆ ಹಲವು ಪ್ರಕಾರಗಳಲ್ಲಿ ಇವರು ಬರೆಯುತ್ತಿದ್ದಾರೆ