ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರವೀಂದ್ರನಾಥ ದೊಡ್ಡಮೇಟಿ
ಇತ್ತೀಚಿನ ಬರಹಗಳು: ರವೀಂದ್ರನಾಥ ದೊಡ್ಡಮೇಟಿ (ಎಲ್ಲವನ್ನು ಓದಿ)

ಇದು ಪರ್ಣಕುಟಿ
ಇಲ್ಲಿ ಮಹಾತ್ಮರ ಚರಕ ತಿರುಗುತ್ತದೆ
ಭಾರತದ ಮಾನ ಮುಚ್ಚುಲು. !

ಇಲ್ಲಿ ಬುಟ್ಟಿ ಗಳನು ಹೆಣೆಯಲು
ಬೆರಳುಗಳೂ ಶ್ರಮಿಸುತಿವೆ.
ಮಣ್ಣು ಮಡಿಕೆಗಳಿಗೆ ತಿಗರಿ
ತಿರುಗುತಿದೆ..!

ಕುಲುಮೆಯ ತಿದಿಗಳು ಉಸಿರಾಡುತಿವೆ..!
ಕಲ್ಲರಳಿಸಿ ಹೂವು ಮಾಡುವ
ಸುಣ್ಣ ದ ಭಟ್ಟಿಗಳು ನಿಂತಿವೆ
ಮನೆ ಮನೆ ಬೆಳಗಲು..!

ಕೈ ಗಳು ದುಡಿಯುತಿವೆ
ಹೊಟ್ಟೆ ಹೊರೆಯಲು..!
ನಮ್ಮ ಅನ್ನವ ನಮ್ಮ
ನಾಡಿಗೇ ನೀಡಲು..!!

ಇಲ್ಲಿ ಗೋಡೆಗಳು ಇದ್ದೂ ಇಲ್ಲದಂತೆ
ಇಲ್ಲಿ ಬಾಗಿಲು ಎಂದರೆ
ಸದಾ ತೆರೆದಿರುವದೆಂದೇ ಅರ್ಥ..!
ರಸ್ತೆ ಗಳೆಂದರೆ ವಿಶಾಲ ಮನಸ್ಸು.. !

ಕೆರೆಗಳು ಸರೋವರಗಳು
ಅಮೃತದ ಮಡುವುಗಳು…!
ಮಣ್ಣು ತಾಯಿಯಾಗಿದೆ
ತೂಗು ತೊಟ್ಟಿಲ ಜೋಗುಳವಾಗಿದೆ..!

ಮಾತುಗಳ ಹೃದಯ ಸತ್ಯ
ನಡೆ ನುಡಿ ಯಲಿ ಪ್ರೀತಿ
ಇಲ್ಲಿರುವ ಬೆಳಕು ದಯೆಯ ನಗುವು
ಅಹಿಂಸೆಯ ನೆಲೆಗಟ್ಟಿನ
ಪರ್ಣಕುಟಿ.. ನಮ್ಮ ಪ್ರೀತಿಯ ಭಾರತ ..!!

ಜಲವರ್ಣ ಚಿತ್ರ ಕೃಪೆ
ನಾ. ರೇವಣಸಿದ್ದಪ್ಪನವರು.
ಚಿತ್ರ ಕಲಾವಿದರು. ಬೆಂಗಳೂರು..