ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಶಾಂತ-ರಸರೇನಲ್ಲ ಇವರು ‘ಶಾಂತರಸ’ರು
ಉರಿವ ಕೆಂಡವ ಎದೆಯಲಿಟ್ಟು ನಡೆದವರು

ಅಧಿಕಾರಕ್ಕೆ ಅರಸೊತ್ತಿಗೆಗೆ ಸಲಾಂ ಹಾಕದವರು
ನೊಂದವರ ಬೇಗುದಿಗೆ ಎತ್ತಿದ ದನಿಯಾದವರು

ಕತೆ ಕಾವ್ಯ ಪ್ರಬಂಧ ಸಂಶೋಧನೆ ಗಜಲ್ ಬಿಡಿ ದ್ವಿಪದಿ
ಹೋದಲ್ಲೆಲ್ಲ ತಮ್ಮತನದ ಮೊಹರನೊತ್ತಿದವರು

ಪ್ರೇಮವೇ ವಿರಹವೇ ಶೋಷಣೆ ಬಂಡಾಯವೇ
ಬದುಕಿನ ಬಣ್ಣಗಳನ್ನೆಲ್ಲ ಗಜಲ್ ಗೆ ತಂದವರು

ಕನ್ನಡಮ್ಮನ ಗುಡಿಗೆ ಗಜಲ್ ತೋರಣ ಕಟ್ಟಿ
ಹೊಸದೊಂದು ಹಾದಿಯಲಿ ತೇರನೆಳೆದವರು

‘ಏಕಲವ್ಯ’ ಶಿಷ್ಯನ ಬೆರಳು ಕೇಳದ ‘ಗುರು’
‘ಜಂಗಮ’ನ ಎದೆಯಲ್ಲಿ ದೀಪಸ್ತಂಭವಾದವರು