ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಎದೆಎದೆಯಲ್ಲಿ ನೋವಿನ ಮೂಟೆಯೊಂದು ಅಡಗಿದೆ
ಪ್ರತಿ ಬಗಲಲ್ಲಿ ಉದ್ದನೆಯ ಸೋಟೆಯೊಂದು ಅಡಗಿದೆ

ಯಾವುದೋ ನೆರಳು ಕವಿದಂತೆ ಕಂಗಾಲು ಲೋಕ
ಎಲ್ಲರಲಿ ಸೋವಿಗೆ ಸಿಕ್ಕ ಬೇಟೆಯೊಂದು ಅಡಗಿದೆ

ಪೊರೆವ ಉಸಿರೇ ವಿಷಾಕ್ತ ಆಸರೆ ಎಲ್ಲಿದೆ ಗೆಳೆಯ
ಮನಮನಗಳಲ್ಲಿ ತಲ್ಲಣದ ಪೇಟೆಯೊಂದು ಅಡಗಿದೆ

ಸಹಽಜ ವ್ಯವಹಾರಗಳಲ್ಲಿ ಬದುಕು ಕಳೆಯುತ್ತದೆ
ಸಿಗ್ಧತೆಯ ಹಿಂದೆ ಅಭೇದ್ಯ ಕೋಟೆಯೊಂದು ಅಡಗಿದೆ

ಕಲ್ಲು ಮುಳ್ಳುಗಳ ದಾರಿ, ನಿಲ್ಲದೆ ನಡೆಯುತಿರು ‘ಜಂಗಮ’
ಬರಡು ನೆಲದಲ್ಲು ಪ್ರೀತಿಯ ಊಟೆಯೊಂದು ಅಡಗಿದೆ