ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ವಾದಗಳು ಬೆಳೆದಿವೆ ಸಂವಾದವನ್ನೇಕೆ ಕೈಬಿಟ್ಟರು
ದ್ವೇಷದುರಿ ಹಬ್ಬುತ್ತಿದೆ ಪ್ರೀತಿಯನ್ನೇಕೆ ಕೈಬಿಟ್ಟರು

ಮುಖವಷ್ಟೇ ಏಕೆ ಮುಖವಾಡದಲ್ಲೂ ಹುಬ್ಬುಗಂಟು
ಸಿಕ್ಕುಗಳ ಸಡಲಿಸುವ ನಗುವನ್ನೇಕೆ ಕೈಬಿಟ್ಟರು

ತನ್ನ ನೆರಳನ್ನು ತಾನೇ ನಂಬದೇ ಹೋಗಿದೆ ಲೋಕ
ಒಳಿತಿನ ಶಕ್ತಿಯಲ್ಲಿ ಭರವಸೆಯನ್ನೇಕೆ ಕೈಬಿಟ್ಟರು

ಬದುಕಿನ ಸೂತ್ರಗಳನ್ನು ಎಲ್ಲೆಲ್ಲಿಯೂ ಅರಸಿದ್ದಾರೆ
ಕೈಯೊಳಗೇ ಇರುವ ಋಜುತೆಯನ್ನೇಕೆ ಕೈಬಿಟ್ಟರು

ಹರಿಗೋಲು ಹೊರಟಿದೆ, ನಿಲ್ಲುವಂತಿಲ್ಲ ‘ಜಂಗಮ’
ಇದೇನಿದು, ನಡುನೀರಿನಲ್ಲಿ ಹುಟ್ಟನ್ನೇಕೆ ಕೈಬಿಟ್ಟರು