ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಹೃದಯ ಮಿತ್ರರೆ,
ನಸುಕು ಮುಂಬೈ ಮಹಾಸಂಚಿಕೆಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಚಿಕೆಯನ್ನು ಓದಿನೋಡಿ ನಾಡಿನ ಗಣ್ಯಾತಿಗಣ್ಯರು , ಸಾಹಿತ್ಯಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಮಂದಿ ಬರಹಗಾರರು ಮುಂಬೈಯಲ್ಲಿ ಇದ್ದಾರೆಂದು ಗೊತ್ತೇ ಇರಲಿಲ್ಲ ಎಂದು ಕೆಲವರು ಅಚ್ಚರಿಪಟ್ಟರು. ಈ ಮಾಲಿಕೆಗೆ ಈಗ ನೂರಕ್ಕೂ ಹೆಚ್ಚು ಬರಹಗಳು ಹರಿದು ಬಂದಿವೆ. ಈ ಸಂಚಿಕೆಯನ್ನು ಸರ್ವಾಂಗ ಸುಂದರವಾಗಿ ಹೊರತರುತ್ತಿರುವ ನಸುಕು ಬಳಗಕ್ಕೆ, ವಿಶೇಷವಾಗಿ ವಿಜಯ್ ಅವರಿಗೆ ಮುಂಬಯಿ ಕನ್ನಡಿಗರ ಪರವಾಗಿ ಅನಂತ ವಂದನೆಗಳು. ಈ ಕಾಯಕದಲ್ಲಿ ನನ್ನೊಂದಿಗೆ ಹೆಗಲುಕೊಟ್ಟ ಆತ್ಮೀಯರಾದ, ಡಾ. ಪೂರ್ಣಿಮಾ ಶೆಟ್ಟಿ, ಸವಿತಾ ಶೆಟ್ಟಿ, ಕಲಾ ಭಾಗ್ವತ್, ಜಯ ಸಾಲ್ಯಾನ್ ಅವರಿಗೂ ವಂದನೆಗಳು. ಮತ್ತೆ ಮುಂದಿನ ಸಂಚಿಕೆಯಲ್ಲಿ ನಮ್ಮ ನಿಮ್ಮ ಭೇಟಿ.
ವಂದನೆಗಳೊಂದಿಗೆ
ಡಾ.ಜಿ.ಎನ್.ಉಪಾಧ್ಯ