ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಮುಪ್ಪಿರದ ಕಾವಿಗೆಲ್ಲಿ
ಜಾಗವಿಲ್ಲಿ
ಬಡತನವೇ ಬಂಡವಾಳ
ಸಿರಿವಂತಿಕೆ ಅನ್ನುವ ಹಾಹಾಕಾರ
ಎರಡೂ ದಡದಲಿ ಬರಿ ಅವರೆ
ಕಾವಿ ಎಂಬುದು ಬರಿ ಒಂದು ಉಡುಪೇ? ವೇಷವೇ?
 
ಜೀವಕ್ಕೆ ತನ್ನ ದಾರಿ
ಹುಡುಕುವ ಪಾಠ ಬೇಕೆ?
ಅದೇನು ಬಯಸಿತ್ತೊ ಏನೊ
ಅದ್ಯಾವ ಅಂಗಳದಲಿ ಮಿಂದಿತ್ತೊ!
 
ಕಾವಿ ಒಂದು ವೈರಾಗ್ಯವಲ್ಲ
ಅದೊಂದು ಮನಸ್ಥಿತಿಯ ಆಯ್ಕೆ
ಹಾಕಲೇ ಬೇಕೆಂದೇನಿಲ್ಲ.